Archive for ಮಾರ್ಚ್ 2009
ಯುಗಾದಿ ಹಬ್ಬದ ಶುಭಾಶಯಗಳು
ಮಾರ್ಚ್ 27, 2009ಸ್ನೇಹವೆಂಬುದು ಬೆಂಗಾಡಿನಲ್ಲಿ ಬೀಸುವ ತಂಗಾಳಿ ಇದ್ದಂತೆ……
ಮಾರ್ಚ್ 21, 2009ಜೀವದ ಗೆಳತಿಯ ನೆನಪುಗಳು-೧
ಒಮ್ಮೆ ಬಾಳೆಂಬ ರಥದಲ್ಲಿ ಸಾಗುತ್ತಿರಬೇಕಾದಾಗ ಸುಂದರ ಹೂದೋಟವ ಕಂಡೆ, ಆ ಸುಂದರವಾದ ಹೂದೋಟವ ನೋಡಿ, ಇನ್ನು ನೋಡುವ ಆಸೆಯಾದರೂ ಮನಸ್ಸಲ್ಲಿದ್ದ ಹೊಟ್ಟೆಕಿಚ್ಚು ನನ್ನ ಕಣ್ಣುಗಳ ಅತ್ತ ನೋಡದಂತೆ ಮಾಡಿತು. ದಿನಗಳು ಉರುಳಿದವು. ಆದರೂ ಆ ಹೂದೋಟವೇ ಒಂದು ದಿನ ನನ್ನರಸಿ ಬರುತ್ತೆ ಎಂಬ ಊಹೇ ಸಹಾ ನನಗಿರಲಿಲ್ಲ. ..ಆದ್ರೆ ಆದದ್ದು ಇದೆ! ಆ ಹೂದೋಟದ ಬಗ್ಗೆ ನಂಗೆ ಹೆಮ್ಮೆ ಇತ್ತು, ಆಸೆ ಇತ್ತು, ಜೊತೆಗೆ ಈ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ಬೇರೆ ನನ್ನ ಮನದಲ್ಲಿ ಕುಣಿದಾಡುತಿತ್ತು. ಆದರೆ ಆ ಹೂದೋಟವೇ ನನ್ನ ಹುಡುಕಿ ಬಂದಾಗ ನಾನು ಅದಕೆ ತಲೆಬಾಗಲೇ ಬೇಕಾಯಿತು. ಈ ಹೂದೋಟ ಯಾರು ಎಂದು ನೀವು ಯೋಚಿಸುತ್ತಿರಬೇಕಲ್ಲವೇ….? ಅವಳೇ ನನ್ನ ಆತ್ಮೀಯ ಗೆಳತಿ, ಚಂದ್ರಮುಖಿ, ಪ್ರಾಣಸಖಿ ಭಾವನ! ಅವಳು ನನಗೇ ಪರಿಚಯವಾದ ರೀತಿ ಇದೆ ತರನಾಗಿತ್ತು. ಹೂದೋಟದಷ್ಟೇ ಸುಂದರವಾಗಿಯೂ ಸಹಾ ಇದ್ದಾಳೆ.
ಸುಮಾರು ಒಂಬತ್ತು ವರುಷಗಳ ಹಿಂದೆ ಮೊದಲ ಭೇಟಿಯಾದಾಗ ಒಂದು ವರುಷ ಪೂರ್ತಿ ಆಕೆಯೊಡನೆ ನಾ ಪೈಪೋಟಿ ನಡೆಸುತ್ತಿದ್ದೆ ಆಕೆಯೂ ಸಹಾ….!! ಆದರೆ “ಸ್ನೇಹ” ಅನ್ನುವ ಅನನ್ಯ ಬಂಧನ ಯಾವ ಘಳಿಗೆಯಲ್ಲಿ ನಮ್ಮಿಬ್ಬರ ನಡುವೆ ಚಿಗುರೊಡೆದು ಬೇರೂರಿಬಿಟ್ಟಿತೋ ..ನಾ ಅರಿಯೆ ! ಈ ಪೈಪೋಟಿ ಇರಿಸು-ಮುರಿಸಿನ ನಡುವೆ ಒಂದು ವಸಂತ ಹಾರಿ ಹೋಗಿತ್ತು. ಸುಂದರವಾದ ಬಾಳಿಗೆ ಈ ಗೆಳತಿಯ ಪ್ರವೇಶ ತುಂಬಾನೇ ಹಿತ ನೀಡಿತ್ತು.ಅಮಾವಾಸ್ಯೆಯ ದಿನಗಳು ಕಳೆದು ಹುಣ್ಣಿಮೆಯ ಬೆಳಕು ಎಲ್ಲೆಡೆ ಹರಡಿತ್ತು , ಚಳಿಗಾಲದ ಎಲೆಗಳು ಉದುರಿ ..ವಸಂತಕಾಲ ಮನೆಬಾಗಿಲಿಗೆ ಬಂದು ತಳಿರುತೋರಣವಾಗಿತ್ತು.ಇಂತಹ ಅಮೃತ ಘಳಿಗೆಯಲ್ಲಿ ಆಕೆ ತಂಗಾಳಿಯಾಗಿ ನನ್ನ ಬಾಳಲ್ಲಿ ಬಂದಳು. . ನಮ್ಮಿಬ್ಬರಲ್ಲಿ ತುಂಬಾ ಒಂದೇ ತರನಾದ ಭಾವನೆಗಳಿದ್ದವು.. ವಸ್ತುಗಳು ಸಹಾ ಇದ್ದವು! ಒಂದು ರೀತಿಯಲ್ಲಿ ಜನ್ಮ-ಜನ್ಮದ ಸಂಬಂಧವಿದೆ ಎಂಬಂತೆ ಭಾಸವಾಗತೊಡಗಿತ್ತು .ಹೀಗಿರುವಾಗ ಒಮ್ಮೆ ಸುಂದರವಾಗಿ ಅರಳಿದ್ದ ಹೂದೋಟವು ಒಣಗಿತ್ತು, ಚಂದಿರನ ಮುಖದಲ್ಲಿ ಕಳೆಗುಂದಿತ್ತು , ಭಾವನೆಗಳು ನೋವಾಗಿ ಹರಿಯತೊಡಗಿತ್ತು , ಅವಳ ಪ್ರಾಣ ನನ್ನ ಕೈಲಿತ್ತು, ಧಾರಾಕಾರವಾಗಿ ಬರುತ್ತಿದ್ದ ಅವಳ ಕಂಬನಿ ನನ್ನ ಮಡಿಲ ತೋಯ್ದಿತ್ತು .. ಒಂದು ಕ್ಷಣ ಏನು ಅರಿಯದೆ,ಇಷ್ಟೊಂದು ಕಂಬನಿಗಳ ಹಿಂದಿನ ನೋವೇನೆಂಬುದನ್ನು ತಿಳಿಯುವ ಕಾತುರವಾಯಿತು. ಅವಳ ಗಲ್ಲವನ್ನು ನನ್ನೆರಡು ಕೈಗಳಿಂದಿಡಿದು ಕೇಳಿದೆ, “ಹೇ..ಭಾವನ , ಏನಯ್ತು? ನಿನ್ನ ನೋವೇನೆಂಬುದ ಹೇಳುವೆಯಾ ಕಂದ..??” ಎಂದೆ. ಅದಕ್ಕೆ ಮೌನವೇ ಉತ್ತರವಾಗಿತ್ತು. ಆದರೂ ಎಡಬಿಡದೆ ಆ ಕಣ್ಣೀರು ಅವಳ ಮುದ್ದಾದ ಕಣ್ಣುಗಳಿಂದ ಸುರಿದು ಗಲ್ಲದ ದಾರಿ ಹಿಡಿದಿದ್ದನ್ನು ತಾಳಲಾರದೆ ನನ್ನ ಕಣ್ಣುಗಳೂ ಅಳತೊಡಗಿದವು. ಆ ದಿನವೆಲ್ಲಾ ಹೀಗೆ ಕಳೆಯಿತು. ನನಗೆ ಏನೂ ಅರಿಯದವಳಂತೆ ಮೂಖ ಪ್ರೇಕ್ಷಕಳಾಗಿ ಅವಳ ಕಣ್ಣೊರೆಸುವ ಪ್ರಯತ್ನವ ಮಾಡಿದೆ. ಆಗೊಮ್ಮೆ-ಈಗೊಮ್ಮೆ ಕೆಲವು ಧೈರ್ಯದ ನುಡಿಗಳ ಹೇಳಿ ಅವಳ ಸಂತೈಸುವುದರೊಳಗಾಗಿ ಸಂಜೆಯಾಗಿತ್ತು.
ಮುಂದಿನ ದಿನ ಶಾಲೆಗೆ ಬಂದವಳೇ ನನ್ನ ಕೈಗೊಂದು ಚೀಟಿ ಇಟ್ಟು ಹೊರಟು ಹೋದಳು. ನನಗೋ ಓದುವ ತವಕ..ಆದರೆ ಅಂತಹ ಮುಕ್ತ ವಾತಾವರಣಕ್ಕಾಗಿ ಮನ ತವಕಿಸುತ್ತಿತ್ತು. ಹಾಗೂ – ಹೀಗೂ ಒಂದು ಪ್ರಶಾಂತವಾದ ಸ್ಥಳ ಸಿಕ್ಕಿತು…ಆ ಚೀಟಿಯ ತೆರೆದು ಓದಲು ಶುರುಮಾಡಿದೆ……ಅದರಲ್ಲಿ ಹೀಗೆ ಬರೆದಿತ್ತು..
ಪ್ರೀತಿಯ ಕವನ,
ಭಾವನ ಅಂತ ಹೆಸರಿಟ್ಟುಕೊಂಡು ಭಾವನೆಗಳ ಅರ್ಥೈಸಿಕೊಳ್ಳದೆ ಇದ್ದ ಸಮಯದಲ್ಲಿ, ಭಾವನೆಗಳ ಹಂಚಿಕೊಳ್ಳಲು ಒಂದು ಪುಟ್ಟ ಹ್ರುದಯವೂ ನನ್ನೊಡನಿಲ್ಲದಿದ್ದ ಸಮಯದಲ್ಲಿ ಭಾವನೆಗಳಿಗೆ ಜೀವತುಂಬಿದ ನನ್ನ ಪ್ರೀತಿಯ ಗೆಳತಿಗೆ ನಾನೆಂದೂ ಋಣಿ . ನಾನು ಇಷ್ಟು ದಿನ ನಿನ್ನನು ಅರ್ಥೈಸಿಕೊಳ್ಳದೇ ನಿನ್ನನು ತುಂಬಾ ನೋಯಿಸಿಬಿಟ್ಟೆ,ನಿನ್ನ ಮುಗ್ಢ ಮನಸಿನ ನಡುವೆ ನನ್ನ ಹುಸಿ ಪ್ರೀತಿಯ ಬೆರೆಸಿದ್ದೆ, ಸಾಧ್ಯವಾದರೆ ನನ್ನ ಕ್ಷಮಿಸಿಬಿಡು. ಈಗ ನಾನು ಒಂದು ತೊಂದರೆಯಲ್ಲಿ ಸಿಕ್ಕಿಬಿದ್ದಿದ್ದೇನೆ. ನನ್ನ ತಂದೆ ಎಲ್ಲ ಲೊಸ್ ಮಾಡಿಕೊಂಡಿದ್ಡಾರೆ, ವಿಪರೀತವಾಗಿ ಕುಡಿಯೋಕೆ ಶುರು ಮಾಡಿಕೊಂಡಿದ್ಡಾರೆ, ಒಂದು ಪುಸ್ತಕ ತೆಗೆದುಕೊಳ್ಳಲೂ ಸಹಾ ನನ್ನಲ್ಲಿ ಹಣವಿಲ್ಲ.. ಏನೂ ದಿಕ್ಕು ತೋಚದಂತಾಗಿದೆ. ನೆಮ್ಮದಿ ಇಲ್ಲದಂತಾಗಿದೆ..ಮನೆಯಲ್ಲಿ ದಿನಾ ರಂಪ-ರಗಳೆ….ನನ್ನ ಕಂಬನಿಗಳ ಹಿಂದಿರುವ ಕಾರಣ ಇದೇ..ನನಗೆ ಬಾಯಿ ಬಿಟ್ಟು ಹೇಳಲು ಸಾಧ್ಯವಾಗಲಿಲ್ಲ, ಅದಕ್ಕೆ ಈ ಪತ್ರದ ಮೂಲಕ ನನ್ನ ನೋವನ್ನು ತೆರೆದಿಟ್ಟಿದ್ದೇನೆ. ನಿನ್ನಂತಹ ಒಳ್ಳೆಯ ಗೆಳತಿ ಸಿಕ್ಕಿದ್ದು ನನ್ನ ಪುಣ್ಯ. ಇನ್ನೆಂದಿಗೂ ನಿನ್ನ ನೋಯಿಸುವುದಿಲ್ಲ, ನನ್ನಾಣೆ!
ಸದಾ ನಿನ್ನವಳೇ ಆದ
ಭಾವನ
ಎಂದು ಬರೆದಿತ್ತು. ಜೊತೆಗೆ ಇನ್ನೊಂದು ಚೀಟಿ ಇತ್ತು, ಅದನ್ನು ತೆಗೆದು ನೋಡಿದ ತಕ್ಷಣ ನನ್ನ ಕಣ್ಣುಗಳಲಿ ನೀರು ತುಂಬಿ ಬಂದಿತು, ಜೊತೆಗೆ ಕೋಪವೂ ಸಹಾ ನುಗ್ಗಿ ಬಂದು ನನ್ನ ಕಣ್ಣುಗಳನ್ನು ಕೆಂಪೇರಿಸಿತು.ಏಕೆಂದರೆ ಅವಳು ಆಕೆಯ ರಕ್ತದಲ್ಲಿ ನನ್ಹೆಸರ ಬರೆದಿದ್ದಳು. ನನ್ಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ಅಲ್ಲಿಯೇ ಕುಸಿದುಬಿದ್ದೆ.ನಂತರ ಕ್ಲಾಸ್ ಗಳು ಶುರುವಾದವು. ಅವಳು ಮತ್ತೆ ನನಗೆ ಸಿಕ್ಕಿದ್ದು ಮಧ್ಯ್ಹಾಹ್ನ ಊಟದ ಸಮಯದಲ್ಲಿ…ಅವಳೊಡನೆ ಮಾತನಾಡುವವರೆಗೂ ನನಗೆ ನೆಮ್ಮದಿಯಿಲ್ಲದಂತಾಯಿತು.ಬೇಗ-ಬೇಗನೆ ಊಟ ಮುಗಿಸಿ ಅವಳ ಕೈ ಹಿಡಿದು ಮೆಟ್ಟಿಲುಗಳ ಬಳಿ ನಡೆದೆ….ಆಕೆ ತುಂಬಾನೆ ಸೂಕ್ಷ್ಮ..ಅಳೋದಕ್ಕೆ ಶುರುಮಾಡಿದಳು, ಆಕೆಯ ಕಂಬನಿಗಳು ನನ್ನ ಹಿಂಸಿಸತೊಡಗಿತ್ತು, ಅವಳ ಕಂಬನಿ ನನ್ನ ಕೋಪವ ಒಂದೇ ಕ್ಷಣದಲ್ಲಿ ಕರಗಿಸಿಬಿಟ್ಟಿತು.. ಮನಃಬಿಚ್ಚಿಮಾತನಾಡುವಂತೆ ಕೋರಿಕೊಂಡೆ. ಸುಮಾರು ಹೊತ್ತು ಮಾತನಾಡಿದ ಬಳಿಕ ಅವಳ ಸ್ಥಿತಿ ಸಾಧಾರಣವಾಯಿತು. ಮನಸ್ಸಲ್ಲಿ ಬೆಂಕಿಯನ್ನಿಟ್ಟುಕೊಂಡು ಹೊರಗೆ ಸದಾ ಹಸನ್ಮುಖಿಯಾಗಿದ್ದ ಅವಳ ಭಾವನೆಗಳು ಅಂದು ನನಗೆ ಅರ್ಥವಾಗತೊಡಗಿತು. ಆಕೆ ನೂರಾರು ಕಷ್ಟಗಳ ಸುಳಿಯಲ್ಲಿ ಸಿಕ್ಕಿ ಬಿದ್ದು ಹೊರಬರಲಾರದೆ ಒದ್ದಾಡುತ್ತಿದ್ದಳು, ಅಂತಹ ಸಂಧರ್ಭದಲ್ಲಿ ನನ್ನದೊಂದು ಅಳಿಲು ಸೇವೆಯೂ ನಡೆಯಿತು, ಆದರೆ ಅದು ಸಾಕಾಗಲಿಲ್ಲ, ಆದರೆ ನನ್ನಿಂದಾಗೋಂತದ್ದು ಅಷ್ಟೇ ಆಗಿತ್ತು, ಆ ಕ್ಷಣಕ್ಕೆ…. ಆದರೆ ಅವಳಿಗೆ ಧೈರ್ಯ ತುಂಬುವ ಸಾಹಸಕ್ಕೆ ಕೈ ಹಾಕಿ ಸಫಲಳಾದೆ. ಅವಳ ನೋವಿಗೆ,ಕಣ್ಣೀರಿಗೆ ನನ್ನ ಮಡಿಲನ್ನು ಆಕೆಗೆ ಧಾರೆ ಎರೆದೆ. ದಿನಾ ಆಕೆ ತನ್ನ ಭಾವನೆಗಳನ್ನು ಪತ್ರದ ಮೂಲಕ ಹಂಚಿಕೊಳ್ಳುತ್ತಿದ್ದಳು.., ನಾನು ಸಹಾ ಹಾಗೆಯೇ ಪ್ರತ್ಯುತ್ತರವ ನೀಡುತ್ತಿದ್ದೆ. ಪ್ರತಿ ದಿನಾ ಒಂದು ಚಿತ್ರವ ಬಿಡಿಸಿ ಕೊಡುತ್ತಿದ್ದಳು..ಅವಳ ಭಾವನೆಗಳಿಗೆ ಆ ಚಿತ್ರಗಳು ಸಾಕ್ಷಿ ಯೆಂಬಂತೆ! ಒಂದು ರೀತಿಯಲ್ಲಿ ಮೌನ ಸಂಭಾಶಣೆ ಇಬ್ಬರಿಗೂ ಹಿತ ನೀಡಿತ್ತು..
“ಅನುಭವಕ್ಕಿಂತ ಅನುಭವದ ನೆನಪೇ ಸಿಹಿ”…..ಅಲ್ಲವೇ???????
ಆಕಾಶದೀಪ
ಮಾರ್ಚ್ 19, 2009ಹೃದಯಾಂತರಾಳದ ಭಾವ ತುಮುಲಗಳಿಗೆ
ಎನಗರಿಯದೆ ಜೀವ ತುಂಬಿ
ಶುಶ್ಕತೆಯಲ್ಲಿ ಬಾಡಿದ ಹೂವಿಗೆ
ತುಂತುರು ಹನಿಯ ಜೀವಾಮೃತವ ನೀಡಿ
ಬಾಳಿಗೆ ಬೆಳದಿಂಗಳ
ರಂಗನ್ನು ಚೆಲ್ಲಾಡಿಸಿ
ಅಂತ್ಯದವರೆಗೂ ಎನ್ನೊಡನಿರು
ನನ್ನ ಹರಸಿ….